ಅರಣ್ಯ ಭವನದಲ್ಲಿ ಸಂವಿಧಾನ ದಿನಾಚರಣೆ

 

ಕರ್ನಾಟಕ ಅರಣ್ಯ ಇಲಾಖೆ ಮುಖ್ಯ ಕಛೇರಿಯಾದ ಬೆಂಗಳೂರಿನ ಅರಣ್ಯ ಭವನದಲ್ಲಿ ಸಂವಿಧಾನ ದಿನವನ್ನು ಆಚರಿಸಲಾಯ್ತು. ಅರಣ್ಯಭವನದ ಸಮ್ಮೇಳನ ಸಭಾಂಗಣದಲ್ಲಿ ಏರ್ಪಡಿಸಿದ್ದ ವಿಶೇಷ ಸಭೆಯಲ್ಲಿ ಇಲಾಖೆಯ ಪ್ರಚಾರ ಮತ್ತು ಮಾಹಿತಿ, ಸಂವಹನ & ತಂತ್ರಜ್ಞಾನ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶ್ರೀ ಶಿವರಾಜ್ ಸಿಂಗ್ ರವರು ಭಾರತದ ಸಂವಿಧಾನ ಪೀಠಿಕೆಯ ಸೃಜನಾತ್ಮಕ ರೂಪವನ್ನು ಇಲಾಖೆಯ ಸಿಬ್ಬಂದಿಗೆ ಓದಿ ಹೇಳಿದರು. ಇದನ್ನು ಉಪಸ್ಥಿತರೆಲ್ಲರೂ ಪುನರುಚ್ಛರಿಸಿದರು. ಸಭೆಯಲ್ಲಿ ಸಾಮಾಜಿಕ ಅರಣ್ಯ ವಿಭಾಗದ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಮತಿ ಅನಿತಾ ಎಸ್. ಅರೇಕಲ್, ಜಾಗೃತ ವಿಭಾಗದ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಮತಿ ಸೀಮಾ ಗಾರ್ಗ್, ಆಡಳಿತ ಮತ್ತು ಸಮನ್ವಯ ವಿಭಾಗದ ಎಪಿಸಿಸಿಎಫ್ ಡಾ. ಸಂಜಯ್ ಎಸ್. ಬಿಜ್ಜೂರು, ಸಿಸಿಎಫ್ ಬಿಸ್ವಜಿತ್ ಮಿಶ್ರಾ ಸೇರಿದಂತೆ ಇತರೆ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.

 

www.aranya.gov.in

 

371 Views
 0
 0